ಶಿವಮೊಗ್ಗ : ಶರಾವತಿ ಹಿನ್ನೀರು ಮಟ್ಟ ಗಣನೀಯ ಕುಸಿತವಾದ ಕಾರಣ ಸೋಮವಾರದಿಂದ ಹಸಿರುಮಕ್ಕಿ ಲಾಂಚ್ ಸೇವೆ ಸ್ಥಗಿತವಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಸಿರುಮಕ್ಕಿಯಲ್ಲಿ ಮಳೆಯ ಕೊರತೆಯಿಂದ ಹಿನ್ನೀರಿನ ಮಟ್ಟ ಕುಸಿತವಾಗಿದೆ. ಹೀಗಾಗಿ ಮುಪ್ಪಾನೆ ಬಳಿಕ ಇದೀಗ ಹಸಿರುಮಕ್ಕಿ ಲಾಂಚ್ ಕೂಡ ಸ್ಥಗಿತವಾಗಿದೆ.
ಹಸಿರುಮಕ್ಕಿ ಸಾಗರ- ಕೊಲ್ಲೂರು ಮಧ್ಯೆ ಪ್ರಮುಖ ಮಾರ್ಗವಾಗಿದೆ. ಹೊಸನಗರ ತಾಲೂಕಿನ ಹಲವು ಊರುಗಳಿಗೆ ಹೋಗಲು ಈ ಮಾರ್ಗ ಅನುಕೂಲವಾಗಿತ್ತು. ಸಾವಿರಾರು ಜನರು ದಿನನಿತ್ಯ ಈ ಮಾರ್ಗ ಬಳಸುತ್ತಾರೆ.
ಲಾಂಚ್ ಸ್ಥಗಿತದ ಕಾರಣದಿಂದ ಇದೀಗ ಹೊಸನಗರ- ನಗರ-ನಿಟ್ಟೂರು ಮಾರ್ಗವಾಗಿ ಜನರ ಓಡಾಟ ನಡೆಸಬೇಕಾಗಿದೆ.
