ಶಿವಮೊಗ್ಗ : ಡಿ.07ರಿಂದ ಜ.05ರವರೆಗೆ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾನಾಮಾರ್ಚನ ಮಹೋತ್ಸವವನ್ನು ನಗರದ ಕೋಟೇ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.07ರ ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತಿದೆ.
ಡಿ. 08ರಿಂದ 17ರವರೆಗೆ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ನಂತರ ಹೆಚ್. ಆರ್. ಶ್ರೀಧರ್ರವರಿಂದ ಪ್ರತಿನಿತ್ಯ ಸಂಜೆ 06.30ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ನಡೆಯಲಿದೆ.
ಡಿ.15ರಿಂದ 17ರವರೆಗೆ ಕಲ್ಲಾಪುರದ ಪವಮಾನ ಆಚಾರ್ ರವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ ನಡೆಯಲಿದೆ.
ಡಿ. 18ಕ್ಕೆ ಸಪ್ತ ಚಿರಂಜೀವಿಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್ಕುಮಾರ್, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ,
ಡಿ. 19ಕ್ಕೆ ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ ಸಮಾವೇಶ,
ಡಿ.20ಕ್ಕೆ ಮಾರುತಿ ಹೋಮ, ಸಂಜೆ ಉಸ್ತಾದ್ ಹುಮಾಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರರವರಿಂದ ಹಿಂದೂಸ್ಥಾನೀ ಸಂಗೀತ, ದಾಸವಾಣಿ ಕಾಯಕ್ರಮ ನಡೆಯಲಿದೆ.
ಡಿ. 21ಕ್ಕೆ ಶ್ರೀ ಗಾಯತ್ರಿ ಹೋಮ, ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಕೀರ್ತನೆ,
ಡಿ.22ಕ್ಕೆ ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಸಂಗಡಿಗರಿಂದ ನಾಗಸ್ವರ,
ಡಿ.23ಕ್ಕೆ ಲಲಿತಾ ಸಹಸ್ರನಾಮ ಹೋಮ, ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆಫ್ ಆರ್ಟ್ನ ವಿದ್ಯಾರ್ಥಿಗಳಿಂದ ನೃತ್ಯ ವೈಭವ,
ಡಿ. 24 ಕ್ಕೆ ಶ್ರೀಲಕ್ಷ್ಮೀ ನರಸಿಂಹ ಹೋಮ, ಸಂಜೆ ಶೃಂಗೇರಿ ಹೆಚ್. ಎಸ್. ನಾಗರಾಜ್ರವರಿಂದ ಕರ್ನಾಟಕ ಶಾಸೀಯ ಸಂಗೀತ,
ಡಿ.25ಕ್ಕೆ ಲಕ್ಷ್ಮೀ ಹಯಗ್ರೀವ ಹೋಮ ಸಂಜೆ ಸಹನಾ ಚೇತನ್ ತಂಡದವರಿಂದ ಭರತ ನಾಟ್ಯ,
ಡಿ.26ಕ್ಕೆ ಸೂಕ್ತ ಹೋಮ, ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ,
ಡಿ.27ಕ್ಕೆ ವೈನತೇಯ ಮಂತ್ರ ಹೋಮ ಸಂಜೆ ವಿದುಷಿ ಸಂಭ್ರಮ ಹೆಚ್. ಎಸ್. ತಂಡದವರಿಂದ ಕರ್ನಾಟಕ ಶಾಸೀಯ ಸಂಗೀತ,
ಡಿ.28ಕ್ಕೆ ವರಾಹಸ್ವಾಮಿ ಮಂತ್ರ ಹೋಮ, ಸಂಜೆ ಗಜೇಂದ್ರ ಮೋಕ್ಷ,
ಡಿ.29ಕ್ಕೆ ಉತ್ಸವ ರಾಮರಿಗೆ ಅಭಿಷೇಕ, ಸಂಜೆ ವೈಭವದ ಸೀತಾ ಕಲ್ಯಾಣ ಮಹೋತ್ಸವ,
ಡಿ.30ಕ್ಕೆ ವೈಕುಂಠ ಏಕಾದಶೀ, ಆನೆ ಉತ್ಸವ ಸಂಜೆ ಕುಮಾರ ಸ್ವಾಮಿ ಸಂಗಡಿಗರಿಂದ ನಾದ ವೈಭವ-ಸ್ಯಾಕ್ಯೋಪೋನ್ ವಾದನ,
ಡಿ.31ಕ್ಕೆ ತೀರ್ಥ ಸ್ನಾನ, ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ,
ಜ.01ಕ್ಕೆ ಸುದರ್ಶನ ಹೋಮ, ಉರುಟಣೆ, 108 ಸತ್ಯನಾರಾಯಣ ವ್ರತ,
ಜ.02ಕ್ಕೆ ಪಲ್ಲಕ್ಕಿ ಉತ್ಸವ ಶ್ರೀವತ್ಸ ಸಂಗಡಿಗರಿಂದ ವೇಣುವಾದನ, ಶಯನೋತ್ಸವ,
ಜ.03ಕ್ಕೆ ಧನ್ವಂತರಿ ಹೋಮ, ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ,
ಜ.04ಕ್ಕೆ ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆ ಸಮಾರೋಪ ಮತ್ತು
ಜ.05ಕ್ಕೆ ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವ ನಡೆಯಲಿದೆ ಎಂದು ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
