Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

February 28, 2026

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»Home»ನ.7 ರಿಂದ ಮೂರು ದಿನಗಳ ಕಾಲ ಸಮುದಾಯ ರಾಜ್ಯಮಟ್ಟದ ನಾಟಕೋತ್ಸವ
Home

ನ.7 ರಿಂದ ಮೂರು ದಿನಗಳ ಕಾಲ ಸಮುದಾಯ ರಾಜ್ಯಮಟ್ಟದ ನಾಟಕೋತ್ಸವ

State-level drama festival
Raghu ShettyBy Raghu ShettyNovember 5, 2025Updated:November 5, 2025No Comments2 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ : ಕರ್ನಾಟಕ ರಾಜ್ಯ ಸಮುದಾಯ ಸಂಘಕ್ಕೆ ೫೦ ವರ್ಷಗಳು ಆದ ಹಿನ್ನೆಲೆಯಲ್ಲಿ ಶಿವಮೊಗ್ಗ ಸಮುದಾಯವು ರಾಜ್ಯಮಟ್ಟದ ಮೂರು ನಾಟಕವನ್ನು ಶಿವಮೊಗ್ಗದಲ್ಲಿ ಪ್ರದರ್ಶನ ಮಾಡುತ್ತಿದೆ ಎಂದು ಸಮುದಾಯದ ಅಧ್ಯಕ್ಷ ಡಾ.ಕೆ.ಜಿ.ವೆಂಕಟೇಶ್ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಶ್ರೀಮತಿ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿ ವಿರುದ್ಧವಾಗಿ ೧೯೭೫ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳು ಸಮುದಾಯ ಸಂಘವನ್ನು ಕಟ್ಟಿಕೊಂಡರು. ಹೆಗ್ಗೋಡಿನ ಪ್ರಸನ್ನ, ಕೀರಂ ನಾಗರಾಜ್, ಕೆ.ವಿ. ನಾರಾಯಣ್, ಶ್ರೀ ವೀರಣ್ಣ ಸಮುದಾಯಕ್ಕೆ ಚಾಲನೆಯನ್ನು ನೀಡಿದರು.ಸಂಸ ರ ನಾಟಕ ವಿಗಡ ವಿಕ್ರಮರಾಯ ವನ್ನು ಬಸವಲಿಂಗಯ್ಯ ನವರು ಹೊಸ ರೀತಿಯಲ್ಲಿ ಆಡಿಸಿ ಸಮುದಾಯಕ್ಕೆ ಚಾಲನೆ ಮೂಡಿಸಿದರು. ಸಮುದಾಯವು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ತೊಡಗಿ ಬೀದಿ ನಾಟಕ ಮತ್ತು ವಿಚಾರ ಸಂಕಿರಣ ಜಾಥಾವನ್ನು ನಡೆಸಿ ಜನರನ್ನು ಎಚ್ಚರಿಸುವ ಕೆಲಸವನ್ನು ಮಾಡಿತು ಎಂದರು.
ಶಿವಮೊಗ್ಗದಲ್ಲಿ ೧೯೭೮ ರಲ್ಲಿ ಬೆಂಗಳೂರು ಸಮುದಾಯದಿಂದ ತರಬೇತಿ ಪಡೆದ ಕೆ ಲಕ್ಷ್ಮೀನಾರಾಯಣರಾವ್ ಸಮುದಾಯ ಸಂಘವನ್ನು ಸ್ಥಾಪಿಸಿದರು. ಬ್ರೇಕ್ಟ್ ನ ಗೆಲಿಲಿಯೋ ತಾಯಿ ಎಂ.ಎಸ್. ಸತ್ಯ ನಿರ್ದೇಶನದ ಕುರಿ ಹೊಸ ರೀತಿಯಲ್ಲಿ ಪ್ರದರ್ಶನ ಮಾಡಲಾಯಿತು.
ಈ ೩೦ ವರ್ಷಗಳಲ್ಲಿ ಸಮುದಾಯ ಚಿತ್ರಕಲಾ ಶಿಬಿರ, ಬೀದಿ ನಾಟಕ ಭಾಷಣ, ನಾಟಕ ಪ್ರದರ್ಶನ ಕವಿಗೋಷ್ಠಿ ವಿಚಾರ ಸಂಕಿರಣ ಜಾನಪದ ಉತ್ಸವ ಜಾಥಾ ಕಿರು ಹೊತ್ತಿಗೆಯ ಪ್ರಕಟಣೆ ಗೀತಾ ಗಾಯನ ಸ್ಪರ್ಧೆ ಹಮ್ಮಿಕೊಳ್ಳುತ್ತಾ ಬಂದಿದೆ. ೧೯೭೯ ಮತ್ತು ೧೯೮೧ ರಲ್ಲಿ ಜಾಥಾವನ್ನು ಕೈಗೊಂಡು ಪತ್ರ ಸಂಗಪ್ಪನ ಕೊಲೆ, ಬೆಳ್ಳಿ, ಅನುಸೂಯ ಬೀದಿ ನಾಟಕವನ್ನು ಮಾಡಲಾಗಿತ್ತು ಎಂದರು.
ನಿರ್ದೇಶಕ ಆಜಯ್ ಗೌಡ ನೀನಾಸಂ ಕಾಂತೇಶ್ ಕದರಮಂಡಲಗಿ, ಸತೀಶ್ ಸಾಸ್ತೆಹಳ್ಳಿ ಸಮುದಾಯಕ್ಕಾಗಿ ನಾಟಕವನ್ನು ನಿರ್ದೇಶನ ಮಾಡಿದರು ರಾಯಚೂರಿನ ರೈತ ಮತ್ತು ಕೂಲಿಯವರ ಹೋರಾಟದಲ್ಲಿ ಸಮುದಾಯ ಶಿವಮೊಗ್ಗದ ಪರವಾಗಿ ಕೆ ಲಕ್ಷ್ಮೀನಾರಾಯಣ್ ರಾವ್ ಮತ್ತು ಡಾ. ಕೆ ಜಿ ವೆಂಕಟೇಶ್ ಭಾಗವಹಿಸಿದ್ದು ಕಿರು ನಾಟಕ ತರಬೇತಿ ಪಡೆದು ಅದನ್ನು ಶಿವಮೊಗ್ಗದಲ್ಲಿ ಜಾಥಾ ನಡೆಸುವ ಮೂಲಕ ಗ್ರಾಮಾಂತರದಲ್ಲಿ ಉರುಳು ನಾಟಕವನ್ನು ಯಶಸ್ವಿಯಾಗಿ ಮಾಡಲಾಗಿತ್ತು ಎಂದರು.
ನ.೦೭ರ ಶುಕ್ರವಾರ ಸಹ್ಯಾದ್ರಿ ಕಾಲೇಜಿನಲ್ಲಿ ರಂಗಭೂಮಿಯಲ್ಲಿ ಸಾಂಸ್ಕೃತಿಕ ಸಾಧ್ಯತೆಗಳು ಎನ್ನುವ ವಿಷಯವಾಗಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ) ಮಾತನಾಡುತ್ತಾರೆ. ರಂಗಾಯಣದ ನಿರ್ದೇಶಕ ಪ್ರಸನ್ನ ಉಪಸ್ಥಿತಿ ಇರುತ್ತಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ನಾಟಕ ಅಕಾಡೆಮಿಯ ಡಾ ಕೆ.ವಿ ನಾಗರಾಜ ಮೂರ್ತಿ ಮಾಡಲಿದ್ದು ಅಧ್ಯಕ್ಷತೆ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಅವಿನಾಶ್ ಟಿ. ವಹಿಸಲಿದ್ದಾರೆ ಎಂದರು.
ಸಂಜೆ ೬ ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ ನಾಟಕ ಉದ್ಘಾಟನೆ ನೇರವೇರಿಸುವವರು. ಅಧ್ಯಕ್ಷತೆಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ, ಆಶಯ ನುಡಿ ಕೆ.ವಿ.ನಾಗರಾಜ್ ಮೂರ್ತಿ, ಮುಖ್ಯ ಅತಿಥಿಯಾಗಿ ಜನಾರ್ಧನ್, ಅಶೋಕ ಪೈ ಸ್ಮಾರಕ ಕಾಲೇಜು ಪ್ರಾಂಶುಪಾಲ ಸಂಧ್ಯಾ ಕಾವೇರಿ ಭಾಗವಹಿಸಲಿದ್ದಾರೆ. ನಂತರ ಬೆಂಗಳೂರು ನೆನಪು ತಂಡದಿಂದ ಪುನೀತ್ ಕರ್ತ ನಿರ್ದೇಶನದ ಮಾಯಾದ್ವೀಪ ನಾಟಕ ಪ್ರದರ್ಶನವಿದೆ ಎಂಧರು.
ನ.೮ರ ಶನಿವಾರ ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿ ಶ್ರೀಮತಿ ಶೈಲಜಾ ಕೊಡಗು, ಡಾ.ಮೇಟಿ ಮಲ್ಲಿಕಾರ್ಜುನ್, ಎಸ್.ದೇವೇಂದ್ರ ಗೌಡ, ಕಾಂತೇಶ್ ಕದರಮಂಡಲಗಿ ಸನ್ಮಾನಿಸಿ ಗೌರವಿಸಲಾಗುವುದು. ನಂತರ ಸಾಸ್ವೆಹಳ್ಳಿ ಸತೀಶ್ ನಿರ್ದೇಶನದ ಶಿವಮೊಗ್ಗ ಸಮುದಾಯದ ನೀರೊಳಗಣ ಕಿಚ್ಚು ಎಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ನ.೯ರ ಭಾನುವಾರ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಜೆ ೫.೩೦ಕ್ಕೆ ನಡೆಯಲಿದ್ದು. ಸಮಾರೋಪ ಭಾಷಣ ಗೌರಿ ಚಂದ್ರಕೇಸರಿ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಮಂಜಪ್ಪ ಪಿ.ಎ. ಸಿ.ಕೆ.ಗುಂಡಣ್ಣ, ಶೇಷಾಚಲ ಎಸ್.ಕೆ. ಉಪಸ್ಥಿತಯಲ್ಲಿ ಸಂಜೆ ೬.೩೦ಕ್ಕೆ ಅಳ್ವಾಸ್ ರಂಗ ಶಿಕ್ಷಣ ಕೇಂದ್ರದ ಜೀವನ ರಾಮ್ ಸುಳ್ಯ ನಿರ್ದೇಶನದ ನಾಡೋಜ ಕಮಲಾಹಂಪನದ ಚಾರು ವಸಂತ ನಾಟಕ ನಡೆಯಲಿದೆ ಎಂದರು.
ಸಂದರ್ಭದಲ್ಲಿ ಕಾಂತೇಶ್ ಕದರಮಂಡಲಗಿ, ಸತೀಶ್ ಸಾಸ್ತೆಹಳ್ಳಿ, ಹೊನ್ನಾಳಿ ಚಂದ್ರಶೇಖರ್ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email
Raghu Shetty
  • Website

Related Posts

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026

ಗಾಂಧಿ ಪಾರ್ಕ್ ಅಭಿವೃದ್ಧಿಗೆ ವೇಗ : ಒಂದು ತಿಂಗಳಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಗುರಿ

February 20, 2026

ಕೇಂದ್ರ ವಿರೋಧವೇ ಕಾಂಗ್ರೆಸ್ ಸರ್ಕಾರದ ಏಕೈಕ ಅಜೆಂಡಾ : ಬಿ.ವೈ. ವಿಜಯೇಂದ್ರ

February 2, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,293 Views

ಓಸಿ–ಮಟ್ಕಾ ದಂಧೆ ಎದುರಲ್ಲಿ ಮೌನವಾಗಿರುವ ವ್ಯವಸ್ಥೆ…!

February 1, 2026260 Views

ಯುವತಿಗೆ ರೂಮಿಗೆ ಕರೆಸಿಕೊಂಡು ಭೀಕರವಾಗಿ ಕೊಲೆಗೈದ ಯುವಕ!

November 24, 2025248 Views

ಕಲಗೋಡು ರತ್ನಾಕರ್‌ಗೆ ನಿಗಮ ಮಂಡಳಿ ಸ್ಥಾನಕ್ಕೆ ಬೇಡಿಕೆ ಇಟ್ಟವರು ಯಾರು…?

November 16, 2025206 Views
Don't Miss
ಪ್ರಮುಖ ಸುದ್ದಿ

ಶಿವಮೊಗ್ಗ ಮಾರಿಕಾಂಬಾ ಜಾತ್ರೆ: ಅದ್ದೂರಿ ಮೆರವಣಿಗೆಯಲ್ಲಿ ದೇವಿಯ ವಿಸರ್ಜನೆ

By Raghu ShettyFebruary 28, 20260

ಶಿವಮೊಗ್ಗ, : ನಗರದ ಪ್ರಸಿದ್ಧ ಶಿವಮೊಗ್ಗ ಮಾರಿಕಾಂಬಾ ಜಾತ್ರೆ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ದೇವಿಯನ್ನು ಭಕ್ತಿಭಾವದಿಂದ ಹಾಗೂ ಅದ್ದೂರಿ ಮೆರವಣಿಗೆಯೊಂದಿಗೆ…

ಶಾಲಾ ಬಾಲಕನ ಹತ್ಯೆ, 7 ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ

February 24, 2026

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 2026

ಕೋಟೆ ಮಾರಿಕಾಂಬ ಜಾತ್ರೆಗೆ ಸಕಲ ಸಿದ್ದತೆ

February 23, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಹೊಲಿಗೆ ಯಂತ್ರ ವಿತರಣಾ ಯೋಜನೆಯಡಿ ಅರ್ಜಿ ಆಹ್ವಾನ

November 11, 20250 Views

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.