Close Menu
A1 suddi | Kannada News | Shivamogga News

Subscribe to Updates

Get the latest creative news from FooBar about art, design and business.

What's Hot

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

July 28, 2026

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026
Facebook X (Twitter) Instagram
Facebook X (Twitter) Instagram
A1 suddi | Kannada News | Shivamogga News
A1 suddi | Kannada News | Shivamogga News
Home»ನಮ್ಮ ಶಿವಮೊಗ್ಗ»ವಿಶಿಷ್ಟವಾಗಿ, ಅರ್ಥಪೂರ್ಣ ರಂಗದಸರಾ ಆಚರಣೆ
ನಮ್ಮ ಶಿವಮೊಗ್ಗ

ವಿಶಿಷ್ಟವಾಗಿ, ಅರ್ಥಪೂರ್ಣ ರಂಗದಸರಾ ಆಚರಣೆ

Raghu ShettyBy Raghu ShettySeptember 23, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಶಿವಮೊಗ್ಗ : ಈ ಬಾರಿ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿ ರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟ-ವಿಭಿನ್ನ, ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ರಂಗದಸರಾ ಕಾರ್ಯಕ್ರಮದಲ್ಲಿ ಒಟ್ಟು ೩೦ ನಾಟಕ ತಂಡಗಳು ೪೧ ಪ್ರದರ್ಶನಗಳನ್ನು ಆಯೋಜಿಸಿವೆ. ಜೊತೆಗೆ ರಂಗಗೀ ತೆ ಹಾಗೂ ಉಪನ್ಯಾಸ ಸೇರಿ ೫೨ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಾರು ೩೦೦ ಕಲಾವಿದರು ಈ ನಾಟಕ ಗಳಲ್ಲಿ ಅಭಿನಯಿಸಲಿದ್ದಾರೆ ಎಂದರು.
ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಕುಟುಂಬಗಳು, ಸಮುದಾಯಗಳು ಇದರಲ್ಲಿ ಭಾಗವಹಿಸುತ್ತಿವೆ. ಕುಟುಂಬ ರಂಗ ಎಂಬ ಕಾರ್ಯಕ್ರಮವನ್ನು ಈ ಬಾರಿಯೂ ಮುಂದುವ ರಿಸಲಾಗಿ ದೆ. ೧೫ ಕುಟುಂಬಗಳ ಮನೆಗಳ ಬಳಿಯೇ ನಾಟಕ ಪ್ರದರ್ಶನವಿ ರುತ್ತದೆ. ಇವುಗಳಲ್ಲಿ ಆಯ್ಕೆಮಾಡಿದ ನಾಲ್ಕು ನಾಟಕಗಳನ್ನು ಕುಟುಂಬ ರಂಗಮಂದಿರದಲ್ಲಿ ಪ್ರದರ್ಶಿಸಲಾ ಗುವುದು. ಶಾಲಾ ಶಿಕ್ಷಕರಿಗೆ ಪ್ರಸಾದನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಕರ್ತವ್ಯರಂಗ ಎಂಬ ನೂತನ ಕಾರ್ಯಕ್ರಮವನ್ನು ಈ ಬಾರಿ ಸೇರಿಸಲಾಗಿದೆ. ವಾಹನ ಮಾರುಕಟ್ಟೆ, ರಿಪೇರಿ ಕ್ಷೇತ್ರ, ಶಿಕ್ಷಕರು, ಅಲೆಮಾರಿ ಸಮುದಾಯಗಳಿಗೆ ಒಂದು ಕಿರುನಾಟಕ ಕಲಿಸಲಾಗುತ್ತದೆ ಎಂದು ತಿಳಿಸಿದರು.
ಸೆ. ೨೪ರಂದು ಬೆಳಿಗ್ಗೆ ೧೦.೩೦ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ಖ್ಯಾತ ರಂಗ ನಿರ್ದೇಶಕ ಗಣೇಶ್ ಮಂದಾರ್ತಿ ಅವರು ರಂಗ ದಸರಾ ಉದ್ಘಾಟಿಸು ವರು. ನಂತರ ಕಾಲೇಜು ವಿದ್ಯಾರ್ಥಿ ಗಳು ಅಭಿನಯಿಸುವ ಮೂರು ನಾಟಕಗಳು ಪ್ರದರ್ಶನವಾಗುವವು. ಗೋಪಾಳದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ತಂಡವು ಕೆ.ವೈ. ನಾರಾಯಣ ಸ್ವಾಮಿ ಅವರ ರಚನೆ, ಮಾನಸ ಸಂತೋಷ್ ಅವರ ನಿರ್ದೇಶನದಲ್ಲಿ ಬಾರಮ್ಮ ಭಾಗೀರಥಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ತಂಡವು ಶ್ರೀನಿವಾಸ ವೈದ್ಯ ಅವರ ರಚನೆ, ವಿಜಯ್ ನೀನಾಸಂ ಅವರ ನಿರ್ದೇಶನದಲ್ಲಿ ದತ್ತೋಪಂತದ ಪತ್ತೆದಾರಿ, ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ನಡೆಯಲಿದ ಎಂದರು.
ಸೆ.೨೫ರಂದು ಶಿವಮೊಗ್ಗದ ವಿವಿಧ ಸ್ಥಳಗಳಲ್ಲಿ ಡಿವಿಎಸ್ (ಸ್ವ) ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮಟೆ ಜಗದೀಶ್ ರಚನೆ ಹಾಗೂ ಗಿರಿಧರ ಎಂ. ದಿಣ್ಣೆಮನೆ ಅವರ ನಿರ್ದೇಶನದಲ್ಲಿ ಬಾಲ್ಯಜೋಪಾನ ಬೀದಿ ನಾಟಕ ಪ್ರದರ್ಶನ ಮಾಡುವರು. ಸಂಜೆ ೬ ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಕರ್ತವ್ಯ ರಂಗ ಕಾರ್ಯಕ್ರಮ ನಡೆಯುವುದು. ಶಿವಮೊಗ್ಗದ ಶಿಕ್ಷಕರು ಡಾ. ಸಾಸ್ತೆಹಳ್ಳಿ ಸತೀಶ್ ಅವರ ರಚನೆ, ಗಂಗಮ್ಮ ಅವರ ನಿರ್ದೇಶನದಲ್ಲಿ ಆನು ಒಲಿದಂತೆ ಹಾಡುವೆ ನಾಟಕ, ಅಲೆಮಾರಿ ಕ್ಯಾಂಪಿನ ನಿವಾಸಿಗಳು ಮಂಜುನಾಥ್ ಎ.ಸಿ. ಅವರ ನಿರ್ದೇ ಶನದಲ್ಲಿ ಭಾಸ ಮಹಾಕವಿಯ ಮಧ್ಯಮ ವ್ಯಾಯೋಗ ನಾಟಕ, ಅಸಂಘಟಿತ ಕಾರ್ಮಿಕ ವರ್ಗದವರು ಬಿ.ಆರ್. ರೇಣುಕಪ್ಪ ಅವರ ನಿರ್ದೇಶನದಲ್ಲಿ ವಿ.ಎನ್. ಅಶ್ವತ್ ಅವರ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಪೊಲೀಸ್ ಸಮುದಾಯ ಭವನದಲ್ಲಿ ಟಿ.ಜೆ. ನಾಗರತ್ನ ಮತ್ತು ತಂಡದ ವರು ರಂಗಗೀತೆ ಹಾಡಲಿದ್ದು, ಎಸ್ಪಿ ಮಿಥುನ್ ಕುಮಾರ್ ಉದ್ಘಾಟಿ ಸುವರು ಎಂದರು.

ಸೆ. ೨೬ರಂದು ಬೆಳಿಗ್ಗೆಯಿಂದ ಶಿವಮೊಗ್ಗದ ವಿವಿಧೆಡೆ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ತಂಡವು ಹಲವು ಲಾವಣಿ ಹಾಗೂ ಜಾನಪದ ಕಥೆಯಾದಾರಿತ ಬೀದಿ ನಾಟಕ ಹಲಗಲಿ ನಾಟಕವನ್ನು ಚಂದನ್ ಎನ್. ಅವರ ನಿರ್ದೇಶನದಲ್ಲಿ ಪ್ರದರ್ಶಿಸುವರು. ಸಂಜೆಯಿಂದ ಶಿವಮೊಗ್ಗದ ಕುವೆಂಪು ರಂU ಮಂದಿರದಲ್ಲಿ ರಂಗ ಛಾಯಾಚಿತ್ರ ಪ್ರದರ್ಶನ, ರಂಗ ಪರಿಕರಗಳ ಪ್ರದರ್ಶನ ನಡೆಯುವುದು. ನಂತರ ಕಲಾಜ್ಯೋತಿ ತಂಡವು ಹರಿಗೆ ಗೋಪಾಲಸ್ವಾಮಿ ಅವರ ನಿರ್ದೇಶನದಲ್ಲಿ ಪ್ರೊ. ಬಿ.ಎಸ್. ಚಂದ್ರಶೇಖರ್ ಅವರ ಪರಹಿತ ಪಾಷಾಣ ನಾಟಕ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಕೋಟೆ ಮಾರಿಕಾಂಬ ದೇವಾಲಯ ಆವರಣದಲ್ಲಿ ರಂಗಗೀತೆ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.
ಸೆ ೨೭ರಂದು ಶಿವಮೊಗ್ಗದ ವಿವಿಧ ಸ್ಥಳದಲ್ಲಿ ಮೈತ್ರಿ ಕಾಲೇಜ್ ಆಫ್ ಎಜ್ಯುಕೇಷನ್ ತಂಡವು ಮಂಜು ರಂಗಾಯಣ ಅವರ ನಿರ್ದೇಶನದಲ್ಲಿ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಬೀದಿ ನಾಟಕವನ್ನು ಶಿವಮೊಗ್ಗದ ವಿವಿಧೆಡೆ ಪ್ರದರ್ಶನ ಮಾಡುವರು. ಸಂಜೆ ೬.೩೦ಕ್ಕೆ ಶರಾವತಿ ನಗರದಲ್ಲಿ ರಂಗಗೀತೆ ಗಾಯನ ನಡೆಯುವುದು. ಸಂಜೆ ೭ಕ್ಕೆ ಕುವೆಂಪು ರಂಗಮಂದಿರದಲ್ಲಿ ಜೋಗಿ ಅವರು ರಚಿಸಿರುವ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ ಆಸ್ಟ್ ಮಿಸ್ಟರ್ ವೈಎನೈ ನಾಟಕವನ್ನು ಆರ್.ಎಸ್. ಹಾಲಸ್ವಾಮಿ ಅವರ ನಿರ್ದೇಶನ ದಲ್ಲಿ ನೇಟಿವ್ ಥಿಯೇಟರ್ ಕಲಾವಿದರು ಅಭಿನಯಿಸುವರು ಎಮದರು.
ಸೆ.೨೮ಕ್ಕೆ ಸಂಜೆ ಕಾಂತೇಶ್ ಕದರಮಂಡಲಗಿ ನಿರ್ದೇಶನದ ರಾವೀನದಿ ದಂಡೆಯಲ್ಲಿ ನಾಟಕ ಪ್ರದರ್ಶನ ಇರುತ್ತದೆ, ಸೆಪ್ಟೆಂಬರ್ ೨೯ರಂದು ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ತಂಡವು ಉಮೇಶ್ ರಚನೆ. ಮಂಜುನಾಥ ಸ್ವಾಮಿ ಅನುವಾದ, ಶಂಕರ್ ಕೆ. ನಿರ್ದೇಶನದಲ್ಲಿ ಬಾಲ್ಯ ವಿವಾಹ ಬೀದಿ ನಾಟಕವನ್ನು ಶಿವಮೊಗ್ಗದ ವಿವಿದೆಡೆ ಪ್ರದರ್ಶನ ಮಾಡುವರು. ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ರಂಗಗೀತೆ ಗಾಯನ, ನಂತರ ಡಾ. ಚಂದ್ರಶೇಖರ ಕಂಬಾರ ಅವರ ಜೋಕುಮಾರಸ್ವಾಮಿ ನಾಟಕವನ್ನು ಸಹ್ಯಾದ್ರಿ ಕಲಾ ತಂಡದ ಕಲಾವಿದರು ಜಿ.ಆರ್. ಲವ ಅವರ ನಿರ್ದೇಶನ ದಲ್ಲಿ ಅಭಿನಯಿಸುವರು ಎಂದರು.
ಸೆ.೩೦ಕ್ಕೆ ರಂಗದಸರಾ ಸಮಾರೋಪ ಸಮಾರಂಭ ನಡೆಯಲಿದ್ದು, ಹಿರಿಯ ಕಲಾವಿದ ಪ್ರಕಾಶ್‌ರಾವ್ ಸಮಾರೋಪ ಭಾಷಣ ಮಾಡುವರು. ಅಂದು ಕೂಡ ಡಾ. ಚಂದ್ರಶೇಖರ್ ಕಂಬಾರ ಅವರ “ಡಾ. ಜೋಕುಮಾರ ಸ್ವಾಮಿ” ನಾಟಕ ಪ್ರದರ್ಶನಗೊ ಳ್ಳಲಿದೆ ಎಂದರು.
ಸಂದರ್ಭದಲ್ಲಿ ಪಾಲಿಕೆಯ ಕಿರಿಯ ಅಭಿಯಂತರ ಹಾಗೂ ರಂಗದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮಧುನಾಯಕ್ ಎನ್., ನಿರ್ದೇಶಕ ಆರ್.ಎಸ್. ಹಾಲಸ್ವಾಮಿ, ಮಂಜುನಾಥ್, ಚಂದನ್, ಅಭಿ, ಸುರೇಶ್, ಉಪಸ್ಥಿತರಿದ್ದರು.

shivamoga
Share. Facebook Twitter Pinterest LinkedIn Tumblr Email
Raghu Shetty
  • Website
  • Facebook
  • Instagram

Related Posts

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026

ಭುಗಿಲೆದ್ದ ಕಮಲ-ಹಸ್ತ ಸಂಘರ್ಷ: ಕಾಂಗ್ರೆಸ್ ಆಫೀಸ್‌ಗೆ ಮುತ್ತಿಗೆ ಯತ್ನ, ಪೊಲೀಸರ ಜೊತೆ ವಾಗ್ವಾದ

July 23, 2026

ಭುಗಿಲೆದ್ದ ‘ನೀಟ್’ ಆಕ್ರೋಶ, ಬಿಜೆಪಿ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ, ಪೊಲೀಸ್ ಜೀಪ್ ಏರಿ ನಾಯಕರಿಂದ ಹೈಡ್ರಾಮಾ

July 23, 2026
Top Posts

ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹತ್ಯೆ ; ವಿಶೇಷ ತರಗತಿ ಮುಗಿಸಿ ಮನೆಗೆ ತೆರಳುವಾಗ ದುರ್ಘಟನೆ; ನಗರದಲ್ಲಿ ಕಟ್ಟೆಚ್ಚರ

February 23, 20261,324 Views

ನರಸಿಂಹ ಹತ್ಯೆ ಪ್ರತಿಧ್ವನಿ: ಸಾಮಾಜಿಕ ಜಾಲತಾಣದಲ್ಲಿ ಪ್ರತೀಕಾರದ ಘೋಷಣೆ?

June 13, 20261,274 Views

ಭದ್ರಾವತಿಯಲ್ಲಿ ಇಸ್ಪೀಟ್ ಕಿಂಗ್ ಮುದ್ದೆ @ ವಿಶ್ವನಾಥ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

June 8, 2026417 Views

ನರಸಿಂಹ ಕೊಲೆ ಕೇಸ್‌ಗೆ ಬಿಗ್ ಬ್ರೇಕ್ : 24 ಗಂಟೆಯೊಳಗೆ ಐವರು ಅರೆಸ್ಟ್

June 13, 2026385 Views
Don't Miss
Home

ಮಾದಕ ವ್ಯಸನ ತಡೆಗೆ ಸಮನ್ವಯದೊಂದಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

By Raghu ShettyJuly 28, 20260

ಶಿವಮೊಗ್ಗ, : ವಿದ್ಯಾರ್ಥಿಗಳ ಬದುಕನ್ನು ಹಾಳುಮಾಡುತ್ತಿರುವ ಮಾದಕ ವ್ಯಸನದಂತಹ ಸಾಮಾಜಿಕ ಪಿಡುಗನ್ನು ತಡೆಯಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಪರಿಣಾಮಕಾರಿ…

ಕಾರು ಅಪಘಾತ; ಬಿಎಸ್ಎನ್ಎಲ್ ಮಾಜಿ ನೌಕರ ಸ್ಥಳದಲ್ಲೇ ಸಾವು

July 28, 2026

ದೇಶದ ಯುವಕರ ಭವಿಷ್ಯದ ಜೊತೆ ಬಿಜೆಪಿ ಆಟವಾಡುತ್ತಿದೆ”: ಮಾಜಿ ಸಚಿವ ಮಧು ಬಂಗಾರಪ್ಪ ವಾಗ್ದಾಳಿ

July 27, 2026

ಗಾಳಿ-ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ: ಮಣಿಪಾಲ್ ಆಸ್ಪತ್ರೆಗೆ ರವಾನೆ

July 25, 2026
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo

Subscribe to Updates

Get the latest creative news from SmartMag about art & design.

About Us
About Us

Your source for the Local news. A1news.com Kannada online News Portal. it offer shivamogga Local News. find more here.
Email Us: A1news@gmail.com
Contact: +9538172845

Facebook X (Twitter) Instagram YouTube WhatsApp Telegram
Featured Posts

ಪಾಕಿಸ್ಥಾನ ಜಿಂದಾಬಾದ್ ಎಂದವರಿಗೆ ಗುಂಡಿಕ್ಕಿ ಕೊಲ್ಲಿ : ಬೇಳೂರು

September 10, 2025

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

September 10, 2025

ಹಸಿರು ಶೃಂಗಾರದಲ್ಲಿ ಶಿವಮೊಗ್ಗ ನಗರ

September 15, 2025
Worldwide News

ಅನುದಾನ ಸದ್ಬಳಕೆ ಮಾಡಿಕೊಳ್ಳಿ

September 17, 20251 Views

ಮೋದಿ ಹುಟ್ಟುಹಬ್ಬ ; ನಿರುದ್ಯೋಗ ದಿನ ಆಚರಣೆ

September 17, 20251 Views

ರಂಗದಸರಾ; ಕುಟುಂಬ ರಂಗ ಕಾರ್ಯಕ್ರಮ

September 18, 20251 Views
A1 suddi | Kannada News | Shivamogga News
Facebook X (Twitter) Instagram WhatsApp Telegram
© 2026 A1 Suddi. Designed by Newbie Techy.

Type above and press Enter to search. Press Esc to cancel.